ಬಾಯಾರು ಶೇಖರ ಶೆಟ್ಟಿಯವರಿಗೆ ವಿಟ್ಲ ಜೋಶಿ ಪ್ರತಿಷ್ಠಾನದ ಪುರಸ್ಕಾರ
ಲೇಖಕರು : ಉದಯವಾಣಿ
ಶನಿವಾರ, ಜನವರಿ 9 , 2016
|
ಜನವರಿ 9, 2016
|
ಬಾಯಾರು ಶೇಖರ ಶೆಟ್ಟಿಯವರಿಗೆ ವಿಟ್ಲ ಜೋಶಿ ಪ್ರತಿಷ್ಠಾನದ ಪುರಸ್ಕಾರ
ವಿಟ್ಲ :
ವಿಟ್ಲ ಜೋಶಿ ಪ್ರತಿಷ್ಠಾನದಿಂದ ಕೊಡಲ್ಪಡುವ ಮೊದಲ ಶತಮಾನೋತ್ಸವ ಪುರಸ್ಕಾರಕ್ಕೆ ಶೇಖರ ಶೆಟ್ಟಿ ಬಾಯಾರು ಆಯ್ಕೆ ಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜ. 10ರಂದು ಮುಳಿಗದ್ದೆಯ ಹೆದ್ದಾರಿ ಶಾಲಾ ವಠಾರದಲ್ಲಿ ನಡೆಯಲಿದೆ.
1965ರಲ್ಲಿ ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಕುಳಾರು ಎಂಬಲ್ಲಿ ಪ್ರಸಿದ್ಧ ಸ್ತ್ರೀ ವೇಷಧಾರಿ ಐತಪ್ಪಶೆಟ್ಟಿ ಹಾಗೂ ಕಲ್ಯಾಣಿ ದಂಪತಿಯ ಪುತ್ರರಾಗಿ ಜನಿಸಿದ ಶೇಖರ ಶೆಟ್ಟಿಯವರು ವೃತ್ತಿಯಲ್ಲಿ ಶಿಕ್ಷಕನಾದರೂ ತಮ್ಮ ಬಿಡುವಿನ ಸಮಯವನ್ನು ಯಕ್ಷಶಿಕ್ಷಣಕ್ಕೆ ಮುಡಿಪಾಗಿರಿಸಿದ ಯಕ್ಷಗುರು. ಬಾಯಾರು ಪ್ರಕಾಶಚಂದ್ರ ರಾವ್ ಅವರಿಂದ ಯಕ್ಷಗಾನ ನಾಟ್ಯ ತರಬೇತಿ ಪಡೆದ ಇವರು ಪರಿಸರದ ಶಾಲೆ ಭಜನಾ ಮಂಡಳಿ ಹಾಗೂ ಕಲಾವೃಂದಗಳಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನಗಳಿಗೆ ಪೂರಕವಾಗಿ ತರಬೇತಿ ನೀಡಿದ ಕಲಾಸಕ್ತರು.
ಯಕ್ಷಗಾನ ವೇಷಧಾರಿ, ಭಾಗವತರಾಗಿ, ಭಜನಾಕಾರರಾಗಿ, ನಾಟಕ ರಚನಾಕಾರರಾಗಿ ಹಾಗೂ ಜಾನಪದ ನೃತ್ಯ ತರಬೇತುದಾರರಾಗಿ ಇವರದು ಬಹುಮುಖ ಪ್ರತಿಭೆ.
ಕೃಪೆ :
udayavani
|
|
|